Monday, June 29, 2015

ಬ್ಲಾಸ್ಟ್ - 5



ಬ್ಯಾಂಕಿನ ಬಳಿ ಬರುವಷ್ಟರಲ್ಲಿ ವಿಜಯ್ ಬಂದು ನಿಂತಿದ್ದರು. ವಿಜಯ್, ಬಸ್ ಸ್ಫೋಟದ ಮಾಡುತ್ತಿರುವವರು ಯಾರೆಂದು ತಿಳಿಯಿತ?

ಹಾ ಸರ್, ಅವರಿಗೆ ಇಲ್ಲೇ ಬರಲು ಹೇಳಿದ್ದೇನೆ... ದಾರಿಯಲ್ಲಿದ್ದಾರೆ ಇನ್ನೇನು ಬಂದು ಬಿಡುತ್ತಾರೆ..  ಯಾಕೆ ಸರ್ ಏನಾದರೂ ಸುಳಿವು ದೊರೆಯಿತ?

ವಿಜಯ್ ಇಂದು ಬೆಳಿಗ್ಗೆ ಪೇಪರ್ ಓದಿದ್ರಾ? ಯಾವುದೇ ವಿಚಿತ್ರ ಖಾಯಿಲೆಗೆ ಜನ ಬಲಿಯಾಗುತ್ತಿದ್ದಾರೆ ಎಂದು...
ಹಾ ಸರ್ ಹೌದು, ಎಲ್ಲಾ ಕಡೆ ಅದೇ ಸುದ್ದಿ ಹರಿದಾಡುತ್ತಿದೆ. ಬೆಂಗಳೂರಿಗೆ ಖಾಯಿಲೆ ಹಬ್ಬಿದೆ ಎಂದು ಎಲ್ಲ ಕಡೆ ಗಾಳಿ ಸುದ್ದಿ ಹಬ್ಬಿದೆ. ನೋಡಿ ಅದಕ್ಕೆ ಎಲ್ಲರೂ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಓಡಾಡುತ್ತಿದ್ದಾರೆ... ಆದರೆ ಅದಕ್ಕೆ ಇದಕ್ಕೆ ಏನು ಸಂಬಂಧ ಸರ್...

ವಿಜಯ್ ನನ್ನ ಅನುಮಾನ ನಿಜ ಆದರೆ ಬಸ್ ಸ್ಫೋಟ, ದರೋಡೆ, ಖಾಯಿಲೆ ಎಲ್ಲವೂ ಒಂದೇ ತಂಡದ ಪ್ಲಾನ್ ಎನಿಸುತ್ತಿದೆ. ನೈಜೀರಿಯಾ ಮೂಲದವರೇ ಇದೆಲ್ಲವನ್ನೂ ಮಾಡುತ್ತಿದ್ದಾರೆ ಎಂದು ನನ್ನ ಅನುಮಾನ.
ಸರ್, ದರೋಡೆ ಮತ್ತು ಬಸ್ ಸ್ಫೋಟ ಓಕೆ... ಆದರೆ ಖಾಯಿಲೆ ಹೇಗೆ ?

ವಿಜಯ್... ಅಲ್ಲೇ ಅವರು ಬುದ್ಧಿವಂತಿಕೆ ಉಪಯೋಗಿಸಿರುವುದು.. ಮೊದಲು ಬಸ್ ಸ್ಫೋಟ ಮಾಡಿದ್ದಾರೆ ಅದರಲ್ಲಿ ಯಾವುದೇ ಸುಳಿವು ಉಳಿಸಲಿಲ್ಲ, ಕೂಡಲೇ ಅದರಿಂದ ನಮ್ಮ ತನಿಖೆಯನ್ನು ಹಾದಿ ತಪ್ಪಿಸಲು ಬ್ಯಾಂಕ್ ದರೋಡೆ ಮಾಡಿದ್ದಾರೆ... ಸಮಯದಲ್ಲಿ ಇಲ್ಲಿ ಖಾಯಿಲೆ ಹಬ್ಬುವಂತೆ ಮಾಡಿದ್ದಾರೆ... ವಿಜಯ್ ನಾವು ಬಸ್ ಸ್ಫೋಟವನ್ನು ನಮ್ಮ ಹಾದಿ ತಪ್ಪಿಸಲು ಮಾಡಿದರು ಎಂದು ಭಾವಿಸಿದ್ದೆವು ... ಆದರೆ ಅವರು ಬ್ಯಾಂಕ್ ದೋಚಿರುವುದು ನಮ್ಮ ಹಾದಿ ತಪ್ಪಿಸಲು ಎಂದು ಈಗ ತಿಳಿಯುತ್ತಿದೆ....

ಸರ್.... ನನಗಿನ್ನೂ ಸರಿಯಾಗಿ ಅರ್ಥವಾಗುತ್ತಿಲ್ಲ... ಅವರು ಹೇಗೆ ಖಾಯಿಲೆಯನ್ನು ಹಬ್ಬಿಸಿದ್ದಾರೆ...

ವಿಜಯ್ ಬಸ್ ಸ್ಫೋಟ ಮಾಡಿದ್ದಾರಲ್ಲ, ಸ್ಫೋಟಕದ ಮೂಲಕ ಮಾರಣಾಂತಿಕ ವೈರಸ್ ಅನ್ನು ಗಾಳಿಯಲ್ಲಿ ಹರಡುವಂತೆ ಮಾಡಿದ್ದಾರೆ. ಸ್ಫೋಟದ ಪ್ರಭಾವದಿಂದ ವೈರಸ್ ಬೇಗ ಗಾಳಿಯಲ್ಲಿ ಹರಡುವುದು ಅವರ ಉದ್ದೇಶ.... ಬಸ್ ಸ್ಫೋಟಗೊಂಡ ಜಾಗದ ಸುತ್ತ ಮುತ್ತ ಹಳ್ಳಿಗಳಲ್ಲಿ ತಾನೇ ಖಾಯಿಲೆ ಹಬ್ಬಿರುವುದು....ಬೇಕಾದರೆ ತನಿಖಾದಳದವರು ಬಂದಾಗ ಖಚಿತ ಪಡಿಸಿಕೊಳ್ಳಬಹುದು... ಎನ್ನುವಷ್ಟರಲ್ಲಿ ಸ್ಫೋಟದ ತನಿಖೆ ಜವಾಬ್ದಾರಿ ಹೊತ್ತ ವಿವೇಕ್ ಅಲ್ಲಿಗೆ ಬಂದು ವಿಜಯ್ ಮೂಲಕ ಅಭಿಮನ್ಯುವಿನ ಪರಿಚಯ ಮಾಡಿಕೊಂಡರು.

ವಿವೇಕ್, ನೀವೇ ತಾನೇ ಬಸ್ ಸ್ಫೋಟದ ತನಿಖೆ ನಡೆಸುತ್ತಿರುವುದು... ಅದರ ಬಗ್ಗೆ ನಿಮಗೆ ತಿಳಿದ ಮಾಹಿತಿ ಕೊಡಿ ಎಂದು ಅಭಿಮನ್ಯು ಕೇಳಿದಾಗ..

ಸರ್ ತನಿಖೆ ನಡೆಸುತ್ತಿದ್ದದ್ದು ಹೌದು... ಆದರೆ ಈಗ ತನಿಖೆ ಸ್ಥಗಿತಗೊಳಿಸಿದ್ದೇವೆ. ನಿಮಗೆ ತಿಳಿದೇ ಇದೆ ಅಲ್ಲಿ ಯಾವುದೋ ವಿಚಿತ್ರ ಖಾಯಿಲೆ ಶುರುವಾಗಿ ಜನ ಸಾಯುತ್ತಿದ್ದರಲ್ಲ... ಅದಕ್ಕೆ ಸಧ್ಯಕ್ಕೆ ತನಿಖೆ ನಿಲ್ಲಿಸಿದ್ದೇವೆ..

ವಿವೇಕ್,, ಖಾಯಿಲೆ ಯಾವ ಯಾವ ಹಳ್ಳಿಗೆ ಹಬ್ಬಿದೆ?

ಸರ್, ಬಸ್ ಸ್ಫೋಟ ಆದ ಜಾಗದ ಕಡೆ ಮತ್ತು ಕಡೆ ಹಳ್ಳಿಗಳಲ್ಲಿ ಖಾಯಿಲೆ ಹಬ್ಬಿದೆ...

ವಿಜಯ್ ನೋಡಿದ್ರಾ ನಾನು ಹೇಳಲಿಲ್ವಾ....

ಸರ್, ಇದರಿಂದ ಏನು ಪ್ರಯೋಜನ ಸರ್ ಅವರಿಗೆ?

ವಿಜಯ್ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೊಂದು ಮಾಫಿಯಾ... ಅವರೇ ವೈರಸ್ ಕಂಡು ಹಿಡಿಯುವುದು ಮತ್ತು ಅದಕ್ಕೆ ಅವರೇ ಔಷಧಿಯನ್ನೂ ಕಂಡು ಹಿಡಿಯುತ್ತಾರೆ. ಸ್ವಲ್ಪ ದಿನದ ನಂತರ ಔಷಧಿಯನ್ನು ಮಾರುಕಟ್ಟೆಗೆ ಅಧಿಕ ದರದಲ್ಲಿ ಬಿಡುತ್ತಾರೆ. ಜನ ವಿಧಿ ಇಲ್ಲದೆ ಕೊಂಡು ಕೊಳ್ಳಲೇ ಬೇಕು... ಇದೊಂದು ಹಣ ಮಾಡುವ ವಿಧಾನ ಅಷ್ಟೇ... ಆದರೆ ತಮ್ಮ ಧನದಾಹಕ್ಕೆ ಅಮಾಯಕರನ್ನು ಬಲಿ ಮಾಡುತ್ತಿದ್ದಾರೆ. ಉಗ್ರವಾದಿಗಳಿಗೂ ಇವರಿಗೂ ಯಾವುದೇ ವ್ಯತ್ಯಾಸ ಇಲ್ಲ.

ಸರ್, ಇದನ್ನು ತಡೆಗಟ್ಟುವುದು ಹೇಗೆ?

ವಿಜಯ್ ಆದಷ್ಟು ಬೇಗ ನೈಜೀರಿಯಾದವರನ್ನು ಪತ್ತೆ ಹಚ್ಚಿ ಇದರ ಔಷಧಿಯನ್ನು ವಶಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಇನ್ನೂ ಅದೆಷ್ಟು ಜನ ಅಮಾಯಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೋ ಹೇಳಲು ಸಾಧ್ಯವಿಲ್ಲ. ಖಾಯಿಲೆ ಹರಡುವುದನ್ನು ತಡೆಯಲಂತೂ ನಮ್ಮ ಕೈಲಿ ಸಾಧ್ಯವಿಲ್ಲ.. ಏಕೆಂದರೆ ಅದು ಗಾಳಿಯಲ್ಲಿ ಸೇರಿ ಹೋಗಿದೆ...
ಅದೇ ಈಗ ಕಗ್ಗಂಟಾಗಿರುವುದು... ಅವರನ್ನು ಪತ್ತೆ ಹಚ್ಚುವುದು ಹೇಗೆ?

ವಿಜಯ್ ಕೂಡಲೇ ಒಂದು ಕೆಲಸ ಮಾಡಿ ನೈಜೀರಿಯಾ ಪೊಲೀಸರೊಂದಿಗೆ ಸಂಪರ್ಕ ಸಾಧಿಸಿ ಅವರಿಗೆ ಸುದ್ದಿ ತಿಳಿಸಿ ಅಲ್ಲಿ ರೀತಿ ಕೆಲಸ  ಯಾವುದಾದರೂ ತಂಡ ಇದೆಯಾ ಎಂದು ವಿಚಾರಿಸಿ ಅವರ ವಿವರಗಳನ್ನು ಕಲೆ ಹಾಕಿದರೆ ಏನಾದರೂ ಉಪಯೋಗ ಆಗಬಹುದೇನೋ. ಅದೆಲ್ಲಕ್ಕಿಂತ ಮೊದಲು ವಿಧಿ ವಿಜ್ಞಾನ ಮತ್ತು ಪ್ರಯೋಗಾಲಯದವರಿಗೆ ಪ್ರದೇಶದ ಪರಿಶೀಲನೆ ನಡೆಸಿ ಅದರ ಫಲಿತಾಂಶ ತೆಗೆದುಕೊಳ್ಳಬೇಕು. ಏಕೆಂದರೆ ನಾವು ಸುಮ್ಮನೆ ಊಹೆಯಲ್ಲಿ ಇದು ಸ್ಫೋಟದಿಂದ ಆಗಿರಬಹುದು ಎಂದು ಊಹಿಸುತ್ತಿದ್ದೇವೆ... ಒಂದು ವೇಳೆ ಅದು ಅಲ್ಲದಿದ್ದರೆ  ವ್ಯರ್ಥವಾಗುತ್ತದೆ. ಆದ್ದರಿಂದ ಕೂಡಲೇ ಅವರಿಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲು ಹೇಳಿ... ಅದರ ಫಲಿತಾಂಶ ನೋಡಿ ನಂತರ ನೈಜೀರಿಯಾ ಪೋಲೀಸರ ಸಂಪರ್ಕ ಸಾಧಿಸಲು IG ಬಳಿ ಅನುಮತಿ ತೆಗೆದುಕೊಳ್ಳೋಣ.

ವಿಜಯ್ ಕೂಡಲೇ ವಿಧಿ ವಿಜ್ಞಾನ ಪ್ರಯೋಗಾಲಯದವರನ್ನು ಸಂಪರ್ಕಿಸಿ ಸ್ಥಳಕ್ಕೆ ಬರಲು ಹೇಳಿ ನಾಳೆಯ ಒಳಗಾಗಿ ಸಂಪೂರ್ಣ ಮಾಹಿತಿ ಬೇಕು ಎಂದು ತಿಳಿಸಿದರು.

ಮರುದಿನ ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬಂದು ಅಭಿಮನ್ಯುವಿನ ಊಹೆ ನಿಜ ಎಂದಾಯಿತು. ಆದಷ್ಟು ಬೇಗ ಇದಕ್ಕೆ ಔಷಧಿಯನ್ನು ಕೊಡದಿದ್ದರೆ ಸಾವಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗುವುದು ಎಂದು ತಿಳಿಸಿದರು.

ಹಿಂದಿನ ದಿನವೇ ಅಭಿಮನ್ಯು IG ಬಳಿ ಸೂಕ್ಷ್ಮವಾಗಿ ವಿಷಯವನ್ನು ತಿಳಿಸಿ ಬೇಕಾದರೆ ನೈಜೀರಿಯಾ ಪೋಲಿಸರನ್ನು ಸಂಪರ್ಕಿಸಲು ಅನುಮತಿ ಬೇಕೆಂದು ತಿಳಿಸಿದ್ದರಿಂದ, ಎಲ್ಲಾ ಸಿದ್ಧತೆ ಮಾಡಿಕೊಂಡಿರಿ, ಅಗತ್ಯ ಬಿದ್ದರೆ ಕೂಡಲೇ ಸಂಪರ್ಕಿಸಿ ಎಂದು ಹೇಳಿದ್ದರಿಂದ ಅಭಿಮನ್ಯು ಕೂಡಲೇ ನೈಜೀರಿಯಾ ಪೊಲೀಸರಿಗೆ ಕರೆ ಮಾಡಿ ನಡೆದ ವಿಷಯವನ್ನು ತಿಳಿಸಿ ಅಲ್ಲಿ ರೀತಿಯ ಧಂಧೆ ನಡೆಸುವ ತಂಡದ ಬಗ್ಗೆ ಮಾಹಿತಿ ತೆಗೆದುಕೊಂಡು, ಅವರ ಪೂರ್ಣ ವಿವರವನ್ನು ಮೇಲ್ ಮಾಡಲು ಹೇಳಿ ಎಲ್ಲ ಸ್ಟೇಷನ್ ಗಳಿಗೂ ಅವರ ಮಾಹಿತಿ  ರವಾನಿಸಿದರು.

ಇಮೇಲ್ ಮೂಲಕ ಬಂದ ಫೋಟೋಗಳ ಕಾಪಿ ತೆಗೆಸಿ ಮನೆಯ ಮಾಲೀಕನನ್ನು ಕರೆಸಿ ಬಾಡಿಗೆಗೆ ಇದ್ದವರ ಗುರುತು ಹಚ್ಚಲು ಹೇಳಿದಾಗ ಹೌದು, ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದವರು ಇವರೇ ಎಂದು ಪತ್ತೆ ಹಚ್ಚಿದನು. ಕೂಡಲೇ ಎರಡು ಫೋಟೋಗಳನ್ನು ಎಲ್ಲಾ ಠಾಣೆಗಳಿಗೂ ಫ್ಯಾಕ್ಸ್ ಮಾಡಲು ಹೇಳಿ, ಮಾಧ್ಯಮಗಳಲ್ಲಿ ಕೂಡ ಪ್ರದರ್ಶನ ಮಾಡಿ ಮಾಹಿತಿ ದೊರೆತರೆ ಕೂಡಲೇ ಸಂಪರ್ಕಿಸಲು ಹೇಳಿದರು.

ಇನ್ನೇನು ಆದಷ್ಟು ಬೇಗ ಅವರನ್ನು ಪತ್ತೆ ಹಚ್ಚಬಹುದು ಎನ್ನುವಷ್ಟರಲ್ಲಿ ಮತ್ತೊಂದು ಆಘಾತ ಕಾದಿತ್ತು. ಅಭಿಮನ್ಯು ಮೊಬೈಲ್ ಗೆ ಒಂದು unknown ನಂಬರಿಂದ ಕರೆ ಮಾಡಿದ ವ್ಯಕ್ತಿ ಇನ್ನು ಸ್ವಲ್ಪ ಹೊತ್ತಿನಲ್ಲಿ ನಿನಗೊಂದು MMS ಬರುತ್ತದೆ. ಮೊದಲು ಅದನ್ನು ನೋಡು, ಆಮೇಲೆ  ಕರೆ ಮಾಡುತ್ತೇನೆ ಎಂದು ಹೇಳಿ ಕರೆ ಕಟ್ ಮಾಡಿದ.

ಕರೆ ಕಟ್ ಮಾಡುವಷ್ಟರಲ್ಲಿ MMS ಬಂದಿತ್ತು. ಅದನ್ನು ಓಪನ್ ಮಾಡಿದರೆ ಅದರಲ್ಲಿದ್ದ ವಿಡಿಯೋ ನೋಡಿದ ಕೂಡಲೇ ಅಭಿಮನ್ಯುವಿಗೆ ಶಾಕ್ ಆಯಿತು. ಪಕ್ಕದಲ್ಲಿದ್ದ ವಿಜಯ್ ಸರ್ ಏನಾಯಿತು ಎಂದು ಅಭಿಮನ್ಯುವಿನ ಕೈಲಿದ್ದ ಮೊಬೈಲ್ ತೆಗೆದುಕೊಂಡು ವಿಡಿಯೋ ನೋಡಿದರೆ ಅದರಲ್ಲಿ ಶಾಲೆಯೊಂದರ ಮಕ್ಕಳನ್ನು ಮುಸುಕುಧಾರಿ ವ್ಯಕ್ತಿಗಳು ಬಂಧಿಗಳನ್ನಾಗಿ ಮಾಡಿಟ್ಟುಕೊಂಡಿರುವುದು ಕಂಡು ಬಂತು. ವಿಡಿಯೋ ಮುಗಿಯುತ್ತಿದ್ದ ಹಾಗೆ ಮತ್ತೆ ಕರೆ ಮಾಡಿದ ವ್ಯಕ್ತಿ, Mr. ಅಭಿಮನ್ಯು ನೀನು ತುಂಬಾ ಚಾಲಾಕಿ ಇದ್ದೀಯಾ. ನಿನ್ನ ಪಾಡಿಗೆ ನೀನು ಇದ್ದಿದ್ದರೆ ಇದ್ಯಾವುದೂ ಮಾಡುವ ಅಗತ್ಯ ನಮಗೆ ಬರುತ್ತಿರಲಿಲ್ಲ... ಈಗ ಹೇಗಿದ್ದರೂ ನಾವು ಮಾಡಿದ ಬ್ಲಾಸ್ಟ್ನಿಂದಲೇ ವೈರಸ್ ಹರಡಿದೆ ಎಂದು ನಿನಗೆ ಗೊತ್ತಾಗಿದೆ... ನೋಡು ಈಗ ಗಮನವಿಟ್ಟು ಕೇಳು, ನನಗೆ ೫೦೦ ಮಿಲಿಯನ್ US ಡಾಲರ್ ಹಣ, ಮತ್ತು ಒಂದು ಚಾರ್ಟರ್ಡ್ ವಿಮಾನ ಬೇಕು. ನಿನಗೆ ನಾಳೆ ಬೆಳಿಗ್ಗೆಯವರೆಗೂ ಮಾತ್ರ ಸಮಯ, ಅಷ್ಟರಲ್ಲಿ ನಾನು ಕೇಳಿದ್ದು ನನಗೆ ದೊರೆಯದಿದ್ದರೆ ಪುಟ್ಟ ಮಕ್ಕಳ ಸಾವಿಗೆ ನೀನು ಮತ್ತು ನಿನ್ನ ಸರ್ಕಾರವೇ ಜವಾಬ್ದಾರಿ ಎಂದು ಹೇಳಿ ಕರೆ ಕಟ್ ಮಾಡಿದ.

Wednesday, June 24, 2015

ಬ್ಲಾಸ್ಟ್ - 4



ಸುರಂಗ ಕೊರೆದಿದ್ದ ಮನೆಯ ಮಾಲೀಕನ ಸುಳಿವು ಸಿಕ್ಕ ಕೂಡಲೇ ಅವನನ್ನು ಕರೆತಂದು ವಿಚಾರಣೆಗೆ ಒಳಪಡಿಸಿದಾಗ, ಆರು ತಿಂಗಳ ಹಿಂದೆ ಇಬ್ಬರು ವಿದೇಶೀಯರು ಬಂದು ಬಾಡಿಗೆಗೆ ನೆಲೆಸಿದ್ದರು, ದರೋಡೆ ನಡೆಯುವ ಒಂದು ವಾರದ ಮುಂಚೆಯಷ್ಟೇ ಅವರು ಖಾಲಿ ಮಾಡಿಕೊಂಡು ಹೋಗಿದ್ದಾಗಿ, ಅಂದಿನಿಂದ ಮನೆ ಖಾಲಿ ಇತ್ತು ಎಂದು ತಿಳಿಸಿದ.

ವಿದೇಶೀಯರು ಎಂಬುದನ್ನು ಕೇಳಿ ಅಭಿಮನ್ಯು ಮತ್ತು ವಿಜಯ್ ಇಬ್ಬರೂ ಆಶ್ಚರ್ಯಚಕಿತರಾಗಿ ಯಾವ ದೇಶದವರು ಮತ್ತು ಯಾವ ಆಧಾರದ ಮೇಲೆ ಅವರಿಗೆ ನೀವು ಬಾಡಿಗೆ ಕೊಟ್ಟಿರಿ ಎಂದು ಕೇಳಿದಾಗ ಮನೆ ಮಾಲೀಕ ತಲೆ ತಗ್ಗಿಸಿ ಮಾಮೂಲಿಗಿಂತ ಹೆಚ್ಚಿನ ಬಾಡಿಗೆಯ ಆಸೆಗೆ ಅವರಿಗೆ ಬಾಡಿಗೆ ಕೊಟ್ಟೆ, ಅವರು ನೀಗ್ರೋಗಳು.... ನೈಜೀರಿಯಾದಿಂದ ಬಂದಿದ್ದಾಗಿ ಹೇಳಿಕೊಂಡಿದ್ದರು.

ವಿಜಯ್ ಇದ್ಯಾವುದೋ ಅಂತರಾಷ್ಟ್ರೀಯ ದರೋಡೆಕೋರರ ತಂಡ ಇದ್ದ ಹಾಗಿದೆ. ನೋಡಿ ಯಾವುದೇ ಅನುಮಾನ ಬರದ ಹಾಗೆ ಒಂದು ವಾರದ ಮುಂಚೆಯೇ ಮನೆಯನ್ನು ಖಾಲಿ ಮಾಡಿದ್ದಾರೆ.

ಅಲ್ರೀ ಅವರು ಮನೆ ಖಾಲಿ ಮಾಡಿದ ಮೇಲೆ ನೀವು ಮನೆಯ ಒಳಗೆ ಎಲ್ಲಾ ನೋಡಿದ್ದೀರಾ ಎಂದು ಮಾಲೀಕನನ್ನು ಕೇಳಿದಾಗ, ಹಾ ಸರ್ ಅವರು ಮನೆ ಖಾಲಿ ಮಾಡಿದ ಕೂಡಲೇ ಒಳಗೆ ಹೋಗಿ ಮಾಮೂಲಿನಂತೆ ಎಲ್ಲಾ ಪರೀಕ್ಷಿಸಿದ್ದೆ... ಆಗ ಸುರಂಗ ಇರಲಿಲ್ಲ. ಅದಾದ ಮೇಲೆ ನಾನು ಒಂದು ವಾರ ನಮ್ಮ ಸ್ವಂತ ಊರಿಗೆ ಒಂದು ಮದುವೆ ಸಲುವಾಗಿ ಹೊರಟು ಹೋಗಿದ್ದೆ...ಮೊನ್ನೆಯಷ್ಟೇ ನಾನು ಬಂದಿದ್ದು...

ಏನು ಊರಿಗೆ ಹೋಗಿದ್ರಾ? ಅಂದ ಹಾಗೆ ನೀವು ಊರಿಗೆ ಹೋಗುವ ವಿಷಯ ನೀಗ್ರೋಗಳಿಗೆ ಹೇಳಿದ್ರಾ?

ಹಾ ಹೌದು ಸರ್, ಅವರು ಹೊರಡುವ ಮುನ್ನ ನನಗೆ ಹೇಳಿದ್ರು... ಅವರಿಗೆ ಮತ್ತೆ ಮನೆ ಬೇಕಾಗುವ ಸಾಧ್ಯತೆ ಇದೆ... ಒಂದು ವಾರದ ಮಟ್ಟಿಗೆ ಯಾರಿಗೂ ಮನೆ ಕೊಡಬೇಡಿ, ವಾರದ ನಂತರ ನಮಗೆ ಮನೆ ಬೇಡದಿದ್ದರೆ ತಿಳಿಸುವುದಾಗಿ ಹೇಳಿದ್ದರು. ಆಗ ನಾನೇ ಅವರಿಗೆ ಹೀಗೆ ಒಂದು ವಾರದ ಮಟ್ಟಿಗೆ ನಾನೂ ಸಹ ಊರಿನಲ್ಲಿ ಇರುವುದಿಲ್ಲ ಎಂದು ಹೇಳಿದ್ದೆ ....

ವಿಜಯ್, ಬಹುಶಃ ಅವರು ಮನೆ ಖಾಲಿ ಮಾಡುವ ಮುನ್ನವೇ ನಕಲಿ ಕೀ ಮಾಡಿಸಿಕೊಂಡಿದ್ದಾರೆ... ಅದರಂತೆಯೇ ಮರುದಿನ ಮತ್ತೆ ಮನೆಗೆ ಬಂದು ಸುರಂಗ ಕೊರೆಯಲು ಶುರುಮಾಡಿದ್ದಾರೆ, ವಾರದೊಳಗೆ ಸುರಂಗ ಕೊರೆದು ದರೋಡೆ ಮಾಡಿ ಪರಾರಿಯಾಗಿದ್ದಾರೆ... ಆದರೆ ಅವರು ಅಷ್ಟು ಬೇಗ ದೇಶ ಬಿಟ್ಟು ಪರಾರಿಯಾಗಲಂತೂ ಸಾಧ್ಯವಿಲ್ಲ. ಏಕೆಂದರೆ ದರೋಡೆ ಮಾಡಿರುವ ಹಣ ನಗದು ರೂಪದಲ್ಲಿರುವುದರಿಂದ ಅವರು ಆಚೆ ಹೋಗಿರಲು ಸಾಧ್ಯವಿಲ್ಲ. ಇನ್ನು ನಗದನ್ನು ಅವರು ಪರಿವರ್ತಿಸಬೇಕೆಂದರೆ.... ವಿಜಯ್... ಕೂಡಲೇ ಎಲ್ಲಾ ಬ್ಯಾಂಕುಗಳಿಗೂ ಸಂದೇಶ ರವಾನೆ ಆಗುವಂತೆ ನೋಡಿ... ಏನೆಂದರೆ ಯಾವುದೇ ದೊಡ್ಡ ಮೊತ್ತ ಅಂದರೆ ಕೋಟಿಯ ಮೇಲೆ ಯಾವುದೇ ಮೊತ್ತಕ್ಕೆ ಡಿಡಿ ಯನ್ನು ಕೊಡಬಾರದೆಂದು ಅದರಲ್ಲೂ ವಿದೇಶೀಯರಿಗೆ ಕೊಡಬೇಡಿ ಎಂದು ಹೇಳಿ... ಹಾಗೆಯೇ ಎರಡು ಮೂರು ದಿನದಲ್ಲಿ ನಗರದಿಂದ ಯಾರಾದರೂ ನೈಜೀರಿಯಾಗೆ ಪ್ರಯಾಣ ಬೆಳೆಸಿದ್ದಾರ ಎಂದು ಪತ್ತೆ ಮಾಡಿ.... ಈಗ ಕೇಸಿಗೆ ಒಂದು ಮಹತ್ತರ ತಿರುವು ಸಿಕ್ಕ ಹಾಗಿದೆ....ನೋಡೋಣ ಇದರ ಹಿಂದೆ ಇನ್ನೆಷ್ಟು ದಿನ ಅಲೆಯಬೇಕೋ.... ನಾನು ಕೂಡಲೇ ವಿಷಯವನ್ನು IG ಗೆ ಕರೆ ಮಾಡಿ ತಿಳಿಸುತ್ತೇನೆ ಎಂದು ಫೋನ್ ತೆಗೆಯಲು ಮುಂದಾದಾಗ...

ಅಲ್ಲ ಸರ್... ಅವರೇ ಮಾಡಿದ್ದಾರೆ ಎಂದು ನಮ್ಮ ಬಳಿ ಯಾವುದೇ ಆಧಾರವಿಲ್ಲವಲ್ಲ... ಅವರು ಒಂದು ವಾರದ ಮುಂಚೆ ಮನೆ ಖಾಲಿ ಮಾಡಿದ್ದಾರೆ ಎಂಬ ಒಂದೇ ಒಂದು ಸಂಶಯದಿಂದ ಅವರೇ ದರೋಡೆ ಮಾಡಿದ್ದಾರೆ ಎಂದು ನಿರ್ಧಾರ ಮಾಡುವುದು ಹೇಗೆ ಸರಿ... ಒಂದು ವೇಳೆ ಅವರು ಮಾಡದೆ ಬೇರೆ ಯಾರಾದರೂ ಮಾಡಿದ್ದರೆ... ಎಂದು ವಿಜಯ್ ಪ್ರಶ್ನಿಸಿದರು...

ವಿಜಯ್ ನಿಮ್ಮ ಮಾತು ನಿಜ...ಆದರೆ ನನಗೇಕೋ ಅವರೇ ಕೆಲಸ ಮಾಡಿದ್ದಾರೆ ಎಂದು ಬಲವಾದ ನಂಬಿಕೆ ಇದೆ... ಇರಲಿ ಒಂದು ಮಾಹಿತಿಯಂತೂ ಕೊಟ್ಟಿರೋಣ... ನಾವು ಸುಮ್ಮನೆ ಕುಳಿತಿಲ್ಲ ಎಂಬುದಾದರೂ ತಿಳಿಯಲಿ ಎಂದು IGಗೆ ಕರೆ ಮಾಡಿ ನಡೆದ ವಿಷಯವನ್ನು ತಿಳಿಸಿದಾಗ, ಆದಷ್ಟು ಬೇಗ ಅವರನ್ನು ಪತ್ತೆ ಮಾಡಿ ವಿಚಾರಣೆ ನಡೆಸಿ ಎಂದು ಕರೆ ಕಟ್ ಮಾಡಿದರು.
ಮರುದಿನ ಬೆಳಿಗ್ಗೆ ಅಭಿಮನ್ಯು ಪೇಪರ್ ಓದುತ್ತಿದ್ದಾಗ ಸುದ್ದಿಯೊಂದು ಕಣ್ಣಿಗೆ ಬಿದ್ದಿತು. ಕೋಲಾರದ ಅಕ್ಕಪಕ್ಕದಲ್ಲಿರುವ ಹಳ್ಳಿಗಳಲ್ಲಿ ವಿಚಿತ್ರವಾದ ಸೋಂಕು ತಗಲಿ ಅನೇಕ ಮಂದಿ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದಾರೆ. ಈಗಾಗಲೇ ಮಾರಣಾಂತಿಕ ಖಾಯಿಲೆಗೆ ಆರು ಮಂದಿ ಮರಣ ಹೊಂದಿದ್ದಾರೆ. ಇಪ್ಪತ್ತು ಮಂದಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ದಿನೇ ದಿನೇ ರೋಗಗ್ರಸ್ಥರ ಸಂಖ್ಯೆ ಹೆಚ್ಚುತ್ತಿದೆ ಮತ್ತು ಇದಕ್ಕೆ ನಿಖರವಾದ ಕಾರಣ ಏನೆಂದು ಪತ್ತೆ ಹಚ್ಚುವಲ್ಲಿ ವೈದ್ಯರು ವಿಫಲರಾಗಿದ್ದಾರೆ. ಸೋಂಕು ತಗುಲಿದ ಎರಡನೇ ದಿನದಿಂದ ರೋಗಿಯ ಅಂಗಗಳು ಒಂದೊಂದೇ ನಿಷ್ಕ್ರಿಯವಾಗುತ್ತ ಹೋಗುತ್ತದೆ. ರೋಗಿಯ ರೋಗ ನಿರೋಧಕ ಶಕ್ತಿ ಬಲವಾಗಿದ್ದರೆ ಹೆಚ್ಚು ದಿನ ಬದುಕುತ್ತಿದ್ದಾನೆ, ಇಲ್ಲವಾದಲ್ಲಿ ವಾರದೊಳಗೆ ಸಾವನ್ನಪ್ಪುತ್ತಿದ್ದಾನೆ. ಇದುವರೆಗೂ ಖಾಯಿಲೆಗೆ ಯಾವುದೇ ಔಷಧಿ ಇಲ್ಲ... ವೈದ್ಯಲೋಕಕ್ಕೆ ಇದೊಂದು ಸವಾಲಾಗಿ ಪರಿಣಮಿಸಿದೆ.

ಸುದ್ದಿಯನ್ನು ಓದಿದ ಅಭಿಮನ್ಯುಗೆ ಛೇ ಇದೆಂಥ ಖಾಯಿಲೆ ಇದು... ಅದೆಲ್ಲಿಂದ ಹುಟ್ಟಿಕೊಳ್ಳುತ್ತವೋ ಹೊಸ ಹೊಸ ಖಾಯಿಲೆಗಳು ಎಂದುಕೊಂಡು ಪೇಪರ್ ಮಡಚಿಟ್ಟು ಸ್ನಾನ ಮಾಡಲು ಮುಂದಾದಾಗ ಮನೆಯ ಬಾಗಿಲಿನ ಬೆಲ್ ಸದ್ದಾಗಿದ್ದು ನೋಡಿ ಬಾಗಿಲು ತೆರೆದರೆ ಎದುರಿಗೆ ಪತ್ನಿ ರಶ್ಮಿ ಮತ್ತು ಮಗಳು ಸೌಂದರ್ಯ ನಿಂತಿದ್ದರು...ಓಹೋ ಬನ್ನಿ ಬನ್ನಿ ಏನು ಇಷ್ಟು ಬೇಗ ತವರು ಮನೆ ಪ್ರಯಾಣ ಮುಗಿದು ಹೋಯಿತ ಎಂದು ಲಗೇಜ್ ತೆಗೆದುಕೊಂಡು ಒಳಗೆ ಬರಮಾಡಿಕೊಂಡು ತಾನೇ ಹೋಗಿ ಕಾಫಿ ಮಾಡಿ ತಂದು ಪತ್ನಿಯ ಕೈಗೆ ಕೊಟ್ಟು ಮಗಳನ್ನು ಕರೆದುಕೊಂಡು ಮುದ್ದಾಡುತ್ತಿದ್ದ.

ಏನು ಸಾಹೇಬರು... ನಾವು ಊರಿಗೆ ಹೋಗೋದೇ ಕಾಯುತ್ತಿದ್ದ ಹಾಗಿತ್ತು ಅನಿಸುತ್ತಿದೆ, ಊರಿಗೆ ಹೋದಾಗಿನಿಂದ ಒಂದೇ ಒಂದು ಸಲ ಫೋನ್ ಮಾಡಿದ್ದು, ಆಮೇಲೆ ಫೋನ್ ಇಲ್ಲ ಕಥೆ ಇಲ್ಲ...

ಅಯ್ಯೋ ರಶ್ಮಿ ನನ್ನ ಕೆಲಸದ ಬಗ್ಗೆ ಗೊತ್ತೇ ಇದೆಯಲ್ಲ ನಿನಗೆ, ನೀನು ಊರಿಗೆ ಹೊರಟ ಮರುದಿನವೇ ಇಲ್ಲೊಂದು ದರೋಡೆ ಕೇಸ್ ಬಂತು, ನೀನು ಹೊರಡುವಾಗ ಇದ್ದ ಬಸ್ ಸ್ಫೋಟದ ಕೇಸನ್ನು ಬಿಟ್ಟು ಕೂಡಲೇ ದರೋಡೆ ಕೇಸ್ ತೆಗೆದುಕೊಳ್ಳಬೇಕು ಎಂದು ಹೇಳಿದರು... ತಕ್ಷಣ ಅದರಲ್ಲಿ ಬ್ಯುಸಿ ಆಗಿಬಿಟ್ಟೆ... ಇನ್ನೂ ಅದರಲ್ಲಿ ಒಂದೇ ಒಂದು ಸುಳಿವು ಸಹ ಸಿಕ್ಕಿಲ್ಲ... ಅದೇ ತಲೆ ಬಿಸಿಯಲ್ಲಿ ಫೋನ್ ಮಾಡಲು ಆಗಿಲ್ಲ ಅಷ್ಟೇ...

ಹಾ ಹೌದು ರೀ, ಅದ್ಯಾವುದೋ ಹೊಸಕೋಟೆ ಬ್ಯಾಂಕ್ ಆಲ್ವಾ ದರೋಡೆ ಆಗಿದ್ದು...ಹೌದು, ಅಂದ ಹಾಗೆ ಬಸ್ ಸ್ಫೋಟ ಕೂಡ ಅದೇ ರಸ್ತೆಯಲ್ಲಿ ಆಲ್ವಾ ಆಗಿದ್ದು... ಕೇಸ್ ಏನಾಯ್ತು? ಅದರಿಂದ ಏನೂ ಮಾಹಿತಿ ಸಿಗಲಿಲ್ವಾ...

ಇಲ್ಲ ರಶ್ಮಿ ಕೇಸ್ ನಲ್ಲೂ ಏನೂ ಮಾಹಿತಿ ಸಿಕ್ಕಿಲ್ಲ... ಕೇಸಿನಲ್ಲೂ ಯಾವುದೇ ನಿಖರವಾದ ಮಾಹಿತಿ ಸಿಕ್ಕಿಲ್ಲ....

ಅಲ್ರೀ, ಅದಲ್ದೇ ಇವಾಗ ಅದ್ಯಾವುದೋ ಹೊಸ ಖಾಯಿಲೆ ಬೇರೆ ಶುರುವಾಗಿದೆಯಂತೆ ಕೋಲಾರದ ಬಳಿ... ಇವತ್ತು ಬೆಳಿಗ್ಗೆ ಆಟೋದವನು ಹೇಳ್ತಿದ್ದ, ಏನೋ ಬೆಂಗಳೂರಿಗೂ ಖಾಯಿಲೆ ಹಬ್ಬುವ ಸಾಧ್ಯತೆ ಇದೆ ಎಂದು... ಹೌದೇನ್ರಿ? ಅರೇ ... ನೋಡ್ರೀ ಖಾಯಿಲೆ ಕೂಡ ಅದೇ ರಸ್ತೆಯಲ್ಲಿ ಶುರುವಾಗಿದೆ... ಏನು ವಿಚಿತ್ರನೋ ಏನೋ ಎಲ್ಲಾ ಕಾಕತಾಳೀಯ ಅನ್ಸತ್ತೆ ಎಂದು ಮಗಳನ್ನು ಕರೆದುಕೊಂಡು ಒಳಗೆ ಹೋದಳು...

ರಶ್ಮಿ ಹೇಳಿದ ಮಾತು ಅಭಿಮನ್ಯುವಿನ ತಲೆ ಹೊಕ್ಕಿತ್ತು... ಬಸ್ ಸ್ಫೋಟ, ಬ್ಯಾಂಕ್ ದರೋಡೆ, ನೈಜೀರಿಯಾ, ಖಾಯಿಲೆ... ಖಾಯಿಲೆ, ನೈಜೀರಿಯಾ, ಸ್ಫೋಟ, ದರೋಡೆ... ಏನಾದರೂ ಸಂಬಂಧ ಇದೆಯಾ.... ಎಲ್ಲೋ ಎಲ್ಲವೂ ಒಂದಕ್ಕೊಂದು ಸಂಬಂಧ ಬೆಸೆದುಕೊಳ್ಳುತ್ತಿರುವಂತೆ ಭಾಸವಾಗಿ ಕೂಡಲೇ ವಿಜಯ್ ಗೆ ಕರೆ ಮಾಡಿ, ವಿಜಯ್ ಬಸ್ ಸ್ಫೋಟದ ಕೇಸ್ ಯಾರು ತನಿಖೆ ನಡೆಸುತ್ತಿರುವುದು ತಿಳಿದುಕೊಂಡು ಕೂಡಲೇ ಅವರಿಗೆ ನನ್ನನ್ನು ಸಂಪರ್ಕಿಸುವಂತೆ ಹೇಳಿ ಮತ್ತು ನೀವು ಆದಷ್ಟು ಬೇಗ ಬ್ಯಾಂಕ್ ಬಳಿ ಬನ್ನಿ...

ಸರ್... ಏನ್ಸಾರ್ ಇದ್ದಕ್ಕಿದ್ದಂತೆ ಮತ್ತೆ ಬಸ್ ಸ್ಫೋಟದ ಬಗ್ಗೆ ವಿಚಾರಿಸುತ್ತಿದ್ದೀರ ? ಏನಾದರೂ ಸುಳಿವು ಸಿಕ್ಕತ?
ಹಾ ವಿಜಯ್ ನೀವು ಮೊದಲು ಮಾಹಿತಿ ತಿಳಿದುಕೊಳ್ಳಿ, ನಾನು ನಿಮಗೆ ಬ್ಯಾಂಕ್ ಬಳಿ ಎಲ್ಲಾ ಹೇಳುತ್ತೇನೆ.