Monday, June 29, 2015

ಬ್ಲಾಸ್ಟ್ - 5



ಬ್ಯಾಂಕಿನ ಬಳಿ ಬರುವಷ್ಟರಲ್ಲಿ ವಿಜಯ್ ಬಂದು ನಿಂತಿದ್ದರು. ವಿಜಯ್, ಬಸ್ ಸ್ಫೋಟದ ಮಾಡುತ್ತಿರುವವರು ಯಾರೆಂದು ತಿಳಿಯಿತ?

ಹಾ ಸರ್, ಅವರಿಗೆ ಇಲ್ಲೇ ಬರಲು ಹೇಳಿದ್ದೇನೆ... ದಾರಿಯಲ್ಲಿದ್ದಾರೆ ಇನ್ನೇನು ಬಂದು ಬಿಡುತ್ತಾರೆ..  ಯಾಕೆ ಸರ್ ಏನಾದರೂ ಸುಳಿವು ದೊರೆಯಿತ?

ವಿಜಯ್ ಇಂದು ಬೆಳಿಗ್ಗೆ ಪೇಪರ್ ಓದಿದ್ರಾ? ಯಾವುದೇ ವಿಚಿತ್ರ ಖಾಯಿಲೆಗೆ ಜನ ಬಲಿಯಾಗುತ್ತಿದ್ದಾರೆ ಎಂದು...
ಹಾ ಸರ್ ಹೌದು, ಎಲ್ಲಾ ಕಡೆ ಅದೇ ಸುದ್ದಿ ಹರಿದಾಡುತ್ತಿದೆ. ಬೆಂಗಳೂರಿಗೆ ಖಾಯಿಲೆ ಹಬ್ಬಿದೆ ಎಂದು ಎಲ್ಲ ಕಡೆ ಗಾಳಿ ಸುದ್ದಿ ಹಬ್ಬಿದೆ. ನೋಡಿ ಅದಕ್ಕೆ ಎಲ್ಲರೂ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಓಡಾಡುತ್ತಿದ್ದಾರೆ... ಆದರೆ ಅದಕ್ಕೆ ಇದಕ್ಕೆ ಏನು ಸಂಬಂಧ ಸರ್...

ವಿಜಯ್ ನನ್ನ ಅನುಮಾನ ನಿಜ ಆದರೆ ಬಸ್ ಸ್ಫೋಟ, ದರೋಡೆ, ಖಾಯಿಲೆ ಎಲ್ಲವೂ ಒಂದೇ ತಂಡದ ಪ್ಲಾನ್ ಎನಿಸುತ್ತಿದೆ. ನೈಜೀರಿಯಾ ಮೂಲದವರೇ ಇದೆಲ್ಲವನ್ನೂ ಮಾಡುತ್ತಿದ್ದಾರೆ ಎಂದು ನನ್ನ ಅನುಮಾನ.
ಸರ್, ದರೋಡೆ ಮತ್ತು ಬಸ್ ಸ್ಫೋಟ ಓಕೆ... ಆದರೆ ಖಾಯಿಲೆ ಹೇಗೆ ?

ವಿಜಯ್... ಅಲ್ಲೇ ಅವರು ಬುದ್ಧಿವಂತಿಕೆ ಉಪಯೋಗಿಸಿರುವುದು.. ಮೊದಲು ಬಸ್ ಸ್ಫೋಟ ಮಾಡಿದ್ದಾರೆ ಅದರಲ್ಲಿ ಯಾವುದೇ ಸುಳಿವು ಉಳಿಸಲಿಲ್ಲ, ಕೂಡಲೇ ಅದರಿಂದ ನಮ್ಮ ತನಿಖೆಯನ್ನು ಹಾದಿ ತಪ್ಪಿಸಲು ಬ್ಯಾಂಕ್ ದರೋಡೆ ಮಾಡಿದ್ದಾರೆ... ಸಮಯದಲ್ಲಿ ಇಲ್ಲಿ ಖಾಯಿಲೆ ಹಬ್ಬುವಂತೆ ಮಾಡಿದ್ದಾರೆ... ವಿಜಯ್ ನಾವು ಬಸ್ ಸ್ಫೋಟವನ್ನು ನಮ್ಮ ಹಾದಿ ತಪ್ಪಿಸಲು ಮಾಡಿದರು ಎಂದು ಭಾವಿಸಿದ್ದೆವು ... ಆದರೆ ಅವರು ಬ್ಯಾಂಕ್ ದೋಚಿರುವುದು ನಮ್ಮ ಹಾದಿ ತಪ್ಪಿಸಲು ಎಂದು ಈಗ ತಿಳಿಯುತ್ತಿದೆ....

ಸರ್.... ನನಗಿನ್ನೂ ಸರಿಯಾಗಿ ಅರ್ಥವಾಗುತ್ತಿಲ್ಲ... ಅವರು ಹೇಗೆ ಖಾಯಿಲೆಯನ್ನು ಹಬ್ಬಿಸಿದ್ದಾರೆ...

ವಿಜಯ್ ಬಸ್ ಸ್ಫೋಟ ಮಾಡಿದ್ದಾರಲ್ಲ, ಸ್ಫೋಟಕದ ಮೂಲಕ ಮಾರಣಾಂತಿಕ ವೈರಸ್ ಅನ್ನು ಗಾಳಿಯಲ್ಲಿ ಹರಡುವಂತೆ ಮಾಡಿದ್ದಾರೆ. ಸ್ಫೋಟದ ಪ್ರಭಾವದಿಂದ ವೈರಸ್ ಬೇಗ ಗಾಳಿಯಲ್ಲಿ ಹರಡುವುದು ಅವರ ಉದ್ದೇಶ.... ಬಸ್ ಸ್ಫೋಟಗೊಂಡ ಜಾಗದ ಸುತ್ತ ಮುತ್ತ ಹಳ್ಳಿಗಳಲ್ಲಿ ತಾನೇ ಖಾಯಿಲೆ ಹಬ್ಬಿರುವುದು....ಬೇಕಾದರೆ ತನಿಖಾದಳದವರು ಬಂದಾಗ ಖಚಿತ ಪಡಿಸಿಕೊಳ್ಳಬಹುದು... ಎನ್ನುವಷ್ಟರಲ್ಲಿ ಸ್ಫೋಟದ ತನಿಖೆ ಜವಾಬ್ದಾರಿ ಹೊತ್ತ ವಿವೇಕ್ ಅಲ್ಲಿಗೆ ಬಂದು ವಿಜಯ್ ಮೂಲಕ ಅಭಿಮನ್ಯುವಿನ ಪರಿಚಯ ಮಾಡಿಕೊಂಡರು.

ವಿವೇಕ್, ನೀವೇ ತಾನೇ ಬಸ್ ಸ್ಫೋಟದ ತನಿಖೆ ನಡೆಸುತ್ತಿರುವುದು... ಅದರ ಬಗ್ಗೆ ನಿಮಗೆ ತಿಳಿದ ಮಾಹಿತಿ ಕೊಡಿ ಎಂದು ಅಭಿಮನ್ಯು ಕೇಳಿದಾಗ..

ಸರ್ ತನಿಖೆ ನಡೆಸುತ್ತಿದ್ದದ್ದು ಹೌದು... ಆದರೆ ಈಗ ತನಿಖೆ ಸ್ಥಗಿತಗೊಳಿಸಿದ್ದೇವೆ. ನಿಮಗೆ ತಿಳಿದೇ ಇದೆ ಅಲ್ಲಿ ಯಾವುದೋ ವಿಚಿತ್ರ ಖಾಯಿಲೆ ಶುರುವಾಗಿ ಜನ ಸಾಯುತ್ತಿದ್ದರಲ್ಲ... ಅದಕ್ಕೆ ಸಧ್ಯಕ್ಕೆ ತನಿಖೆ ನಿಲ್ಲಿಸಿದ್ದೇವೆ..

ವಿವೇಕ್,, ಖಾಯಿಲೆ ಯಾವ ಯಾವ ಹಳ್ಳಿಗೆ ಹಬ್ಬಿದೆ?

ಸರ್, ಬಸ್ ಸ್ಫೋಟ ಆದ ಜಾಗದ ಕಡೆ ಮತ್ತು ಕಡೆ ಹಳ್ಳಿಗಳಲ್ಲಿ ಖಾಯಿಲೆ ಹಬ್ಬಿದೆ...

ವಿಜಯ್ ನೋಡಿದ್ರಾ ನಾನು ಹೇಳಲಿಲ್ವಾ....

ಸರ್, ಇದರಿಂದ ಏನು ಪ್ರಯೋಜನ ಸರ್ ಅವರಿಗೆ?

ವಿಜಯ್ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೊಂದು ಮಾಫಿಯಾ... ಅವರೇ ವೈರಸ್ ಕಂಡು ಹಿಡಿಯುವುದು ಮತ್ತು ಅದಕ್ಕೆ ಅವರೇ ಔಷಧಿಯನ್ನೂ ಕಂಡು ಹಿಡಿಯುತ್ತಾರೆ. ಸ್ವಲ್ಪ ದಿನದ ನಂತರ ಔಷಧಿಯನ್ನು ಮಾರುಕಟ್ಟೆಗೆ ಅಧಿಕ ದರದಲ್ಲಿ ಬಿಡುತ್ತಾರೆ. ಜನ ವಿಧಿ ಇಲ್ಲದೆ ಕೊಂಡು ಕೊಳ್ಳಲೇ ಬೇಕು... ಇದೊಂದು ಹಣ ಮಾಡುವ ವಿಧಾನ ಅಷ್ಟೇ... ಆದರೆ ತಮ್ಮ ಧನದಾಹಕ್ಕೆ ಅಮಾಯಕರನ್ನು ಬಲಿ ಮಾಡುತ್ತಿದ್ದಾರೆ. ಉಗ್ರವಾದಿಗಳಿಗೂ ಇವರಿಗೂ ಯಾವುದೇ ವ್ಯತ್ಯಾಸ ಇಲ್ಲ.

ಸರ್, ಇದನ್ನು ತಡೆಗಟ್ಟುವುದು ಹೇಗೆ?

ವಿಜಯ್ ಆದಷ್ಟು ಬೇಗ ನೈಜೀರಿಯಾದವರನ್ನು ಪತ್ತೆ ಹಚ್ಚಿ ಇದರ ಔಷಧಿಯನ್ನು ವಶಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಇನ್ನೂ ಅದೆಷ್ಟು ಜನ ಅಮಾಯಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೋ ಹೇಳಲು ಸಾಧ್ಯವಿಲ್ಲ. ಖಾಯಿಲೆ ಹರಡುವುದನ್ನು ತಡೆಯಲಂತೂ ನಮ್ಮ ಕೈಲಿ ಸಾಧ್ಯವಿಲ್ಲ.. ಏಕೆಂದರೆ ಅದು ಗಾಳಿಯಲ್ಲಿ ಸೇರಿ ಹೋಗಿದೆ...
ಅದೇ ಈಗ ಕಗ್ಗಂಟಾಗಿರುವುದು... ಅವರನ್ನು ಪತ್ತೆ ಹಚ್ಚುವುದು ಹೇಗೆ?

ವಿಜಯ್ ಕೂಡಲೇ ಒಂದು ಕೆಲಸ ಮಾಡಿ ನೈಜೀರಿಯಾ ಪೊಲೀಸರೊಂದಿಗೆ ಸಂಪರ್ಕ ಸಾಧಿಸಿ ಅವರಿಗೆ ಸುದ್ದಿ ತಿಳಿಸಿ ಅಲ್ಲಿ ರೀತಿ ಕೆಲಸ  ಯಾವುದಾದರೂ ತಂಡ ಇದೆಯಾ ಎಂದು ವಿಚಾರಿಸಿ ಅವರ ವಿವರಗಳನ್ನು ಕಲೆ ಹಾಕಿದರೆ ಏನಾದರೂ ಉಪಯೋಗ ಆಗಬಹುದೇನೋ. ಅದೆಲ್ಲಕ್ಕಿಂತ ಮೊದಲು ವಿಧಿ ವಿಜ್ಞಾನ ಮತ್ತು ಪ್ರಯೋಗಾಲಯದವರಿಗೆ ಪ್ರದೇಶದ ಪರಿಶೀಲನೆ ನಡೆಸಿ ಅದರ ಫಲಿತಾಂಶ ತೆಗೆದುಕೊಳ್ಳಬೇಕು. ಏಕೆಂದರೆ ನಾವು ಸುಮ್ಮನೆ ಊಹೆಯಲ್ಲಿ ಇದು ಸ್ಫೋಟದಿಂದ ಆಗಿರಬಹುದು ಎಂದು ಊಹಿಸುತ್ತಿದ್ದೇವೆ... ಒಂದು ವೇಳೆ ಅದು ಅಲ್ಲದಿದ್ದರೆ  ವ್ಯರ್ಥವಾಗುತ್ತದೆ. ಆದ್ದರಿಂದ ಕೂಡಲೇ ಅವರಿಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲು ಹೇಳಿ... ಅದರ ಫಲಿತಾಂಶ ನೋಡಿ ನಂತರ ನೈಜೀರಿಯಾ ಪೋಲೀಸರ ಸಂಪರ್ಕ ಸಾಧಿಸಲು IG ಬಳಿ ಅನುಮತಿ ತೆಗೆದುಕೊಳ್ಳೋಣ.

ವಿಜಯ್ ಕೂಡಲೇ ವಿಧಿ ವಿಜ್ಞಾನ ಪ್ರಯೋಗಾಲಯದವರನ್ನು ಸಂಪರ್ಕಿಸಿ ಸ್ಥಳಕ್ಕೆ ಬರಲು ಹೇಳಿ ನಾಳೆಯ ಒಳಗಾಗಿ ಸಂಪೂರ್ಣ ಮಾಹಿತಿ ಬೇಕು ಎಂದು ತಿಳಿಸಿದರು.

ಮರುದಿನ ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬಂದು ಅಭಿಮನ್ಯುವಿನ ಊಹೆ ನಿಜ ಎಂದಾಯಿತು. ಆದಷ್ಟು ಬೇಗ ಇದಕ್ಕೆ ಔಷಧಿಯನ್ನು ಕೊಡದಿದ್ದರೆ ಸಾವಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗುವುದು ಎಂದು ತಿಳಿಸಿದರು.

ಹಿಂದಿನ ದಿನವೇ ಅಭಿಮನ್ಯು IG ಬಳಿ ಸೂಕ್ಷ್ಮವಾಗಿ ವಿಷಯವನ್ನು ತಿಳಿಸಿ ಬೇಕಾದರೆ ನೈಜೀರಿಯಾ ಪೋಲಿಸರನ್ನು ಸಂಪರ್ಕಿಸಲು ಅನುಮತಿ ಬೇಕೆಂದು ತಿಳಿಸಿದ್ದರಿಂದ, ಎಲ್ಲಾ ಸಿದ್ಧತೆ ಮಾಡಿಕೊಂಡಿರಿ, ಅಗತ್ಯ ಬಿದ್ದರೆ ಕೂಡಲೇ ಸಂಪರ್ಕಿಸಿ ಎಂದು ಹೇಳಿದ್ದರಿಂದ ಅಭಿಮನ್ಯು ಕೂಡಲೇ ನೈಜೀರಿಯಾ ಪೊಲೀಸರಿಗೆ ಕರೆ ಮಾಡಿ ನಡೆದ ವಿಷಯವನ್ನು ತಿಳಿಸಿ ಅಲ್ಲಿ ರೀತಿಯ ಧಂಧೆ ನಡೆಸುವ ತಂಡದ ಬಗ್ಗೆ ಮಾಹಿತಿ ತೆಗೆದುಕೊಂಡು, ಅವರ ಪೂರ್ಣ ವಿವರವನ್ನು ಮೇಲ್ ಮಾಡಲು ಹೇಳಿ ಎಲ್ಲ ಸ್ಟೇಷನ್ ಗಳಿಗೂ ಅವರ ಮಾಹಿತಿ  ರವಾನಿಸಿದರು.

ಇಮೇಲ್ ಮೂಲಕ ಬಂದ ಫೋಟೋಗಳ ಕಾಪಿ ತೆಗೆಸಿ ಮನೆಯ ಮಾಲೀಕನನ್ನು ಕರೆಸಿ ಬಾಡಿಗೆಗೆ ಇದ್ದವರ ಗುರುತು ಹಚ್ಚಲು ಹೇಳಿದಾಗ ಹೌದು, ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದವರು ಇವರೇ ಎಂದು ಪತ್ತೆ ಹಚ್ಚಿದನು. ಕೂಡಲೇ ಎರಡು ಫೋಟೋಗಳನ್ನು ಎಲ್ಲಾ ಠಾಣೆಗಳಿಗೂ ಫ್ಯಾಕ್ಸ್ ಮಾಡಲು ಹೇಳಿ, ಮಾಧ್ಯಮಗಳಲ್ಲಿ ಕೂಡ ಪ್ರದರ್ಶನ ಮಾಡಿ ಮಾಹಿತಿ ದೊರೆತರೆ ಕೂಡಲೇ ಸಂಪರ್ಕಿಸಲು ಹೇಳಿದರು.

ಇನ್ನೇನು ಆದಷ್ಟು ಬೇಗ ಅವರನ್ನು ಪತ್ತೆ ಹಚ್ಚಬಹುದು ಎನ್ನುವಷ್ಟರಲ್ಲಿ ಮತ್ತೊಂದು ಆಘಾತ ಕಾದಿತ್ತು. ಅಭಿಮನ್ಯು ಮೊಬೈಲ್ ಗೆ ಒಂದು unknown ನಂಬರಿಂದ ಕರೆ ಮಾಡಿದ ವ್ಯಕ್ತಿ ಇನ್ನು ಸ್ವಲ್ಪ ಹೊತ್ತಿನಲ್ಲಿ ನಿನಗೊಂದು MMS ಬರುತ್ತದೆ. ಮೊದಲು ಅದನ್ನು ನೋಡು, ಆಮೇಲೆ  ಕರೆ ಮಾಡುತ್ತೇನೆ ಎಂದು ಹೇಳಿ ಕರೆ ಕಟ್ ಮಾಡಿದ.

ಕರೆ ಕಟ್ ಮಾಡುವಷ್ಟರಲ್ಲಿ MMS ಬಂದಿತ್ತು. ಅದನ್ನು ಓಪನ್ ಮಾಡಿದರೆ ಅದರಲ್ಲಿದ್ದ ವಿಡಿಯೋ ನೋಡಿದ ಕೂಡಲೇ ಅಭಿಮನ್ಯುವಿಗೆ ಶಾಕ್ ಆಯಿತು. ಪಕ್ಕದಲ್ಲಿದ್ದ ವಿಜಯ್ ಸರ್ ಏನಾಯಿತು ಎಂದು ಅಭಿಮನ್ಯುವಿನ ಕೈಲಿದ್ದ ಮೊಬೈಲ್ ತೆಗೆದುಕೊಂಡು ವಿಡಿಯೋ ನೋಡಿದರೆ ಅದರಲ್ಲಿ ಶಾಲೆಯೊಂದರ ಮಕ್ಕಳನ್ನು ಮುಸುಕುಧಾರಿ ವ್ಯಕ್ತಿಗಳು ಬಂಧಿಗಳನ್ನಾಗಿ ಮಾಡಿಟ್ಟುಕೊಂಡಿರುವುದು ಕಂಡು ಬಂತು. ವಿಡಿಯೋ ಮುಗಿಯುತ್ತಿದ್ದ ಹಾಗೆ ಮತ್ತೆ ಕರೆ ಮಾಡಿದ ವ್ಯಕ್ತಿ, Mr. ಅಭಿಮನ್ಯು ನೀನು ತುಂಬಾ ಚಾಲಾಕಿ ಇದ್ದೀಯಾ. ನಿನ್ನ ಪಾಡಿಗೆ ನೀನು ಇದ್ದಿದ್ದರೆ ಇದ್ಯಾವುದೂ ಮಾಡುವ ಅಗತ್ಯ ನಮಗೆ ಬರುತ್ತಿರಲಿಲ್ಲ... ಈಗ ಹೇಗಿದ್ದರೂ ನಾವು ಮಾಡಿದ ಬ್ಲಾಸ್ಟ್ನಿಂದಲೇ ವೈರಸ್ ಹರಡಿದೆ ಎಂದು ನಿನಗೆ ಗೊತ್ತಾಗಿದೆ... ನೋಡು ಈಗ ಗಮನವಿಟ್ಟು ಕೇಳು, ನನಗೆ ೫೦೦ ಮಿಲಿಯನ್ US ಡಾಲರ್ ಹಣ, ಮತ್ತು ಒಂದು ಚಾರ್ಟರ್ಡ್ ವಿಮಾನ ಬೇಕು. ನಿನಗೆ ನಾಳೆ ಬೆಳಿಗ್ಗೆಯವರೆಗೂ ಮಾತ್ರ ಸಮಯ, ಅಷ್ಟರಲ್ಲಿ ನಾನು ಕೇಳಿದ್ದು ನನಗೆ ದೊರೆಯದಿದ್ದರೆ ಪುಟ್ಟ ಮಕ್ಕಳ ಸಾವಿಗೆ ನೀನು ಮತ್ತು ನಿನ್ನ ಸರ್ಕಾರವೇ ಜವಾಬ್ದಾರಿ ಎಂದು ಹೇಳಿ ಕರೆ ಕಟ್ ಮಾಡಿದ.

No comments:

Post a Comment